ಹರಿಯಗೊಡದಿರು ಮನವೇ
ಎಲ್ಲೆಂದರಲ್ಲಿ
ಮನವು ಮರ್ಕಟವೆಂಬ
ಮಾತು ನಿಜವಿಲ್ಲಿ.
ಓಡುವುದು ನದಿಯಂತೆ
ಬೀಸುವ ಗಾಳಿಯಂತೆ
ಕತ್ತಿಯ ಅಲುಗಿನಂತೆ
ಸುಳಿಯುವುದು ಕ್ಷಣ ಕ್ಷಣ
ಚಪಲ ಚಿತ್ತವ ಹಿಡಿದು ಕಟ್ಟುವ
ಇಂದ್ರಿಯ ನಿಗ್ರಹ ಶಕ್ತಿ
ಇದ್ದರೆ ನೀನಾಗುವೆ ಮಹಾವ್ಯಕ್ತಿ
ಯತ್ನದಿಂದ ಪ್ರಯತ್ನದಿಂದ
ಸಾಧನೆಯ ಬಲದಿಂದ
ಮನಕೆ ಹಾಕು ಲಗಾಮು
ನಿನಗೆ ತೋರುವ ಹಾದಿಯಲಿ
ಛಲದ ಅಭಿವ್ಯಕ್ತಿಯಲಿ
ಮನವ ಮುನ್ನಡೆಸು
ಮೂಗು ತೂರಿಸದಿರು
ಪರರ ವಿಷಯಾಸಕ್ತಿಗೆ
ಚಿಂತೆಯ ಚಿತೆಯಲಿ
ಬೇಯದಿರು ಬರಿದೆ
ಗಾಳಿಯನು ಗುದ್ದಿ
ಮೈ ನೋಯಿಸುವ ಪರಿ
ದುಡುಕುತನದ ದೂರ ಸರಿ
ಚಿಂತಿಸದಿರು ವ್ಯರ್ಥ ಜಿಜ್ಞಾಸೆಯಲಿ
ಕತ್ತಲಿನ ಗರ್ಭವ ಸೀಳಿ
ಹೊರಬರಲಿ ವಾಸ್ತವತೆಯ ಬೆಳಕು
ಹಣ ಅಂತಸ್ತು ಅಧಿಕಾರ
ಇರಬಹುದು ಬಾಳಿಗೆ ಸಾಕಾರ
ಜೀವನವೆಂದರೆ ನೂರು ಅರ್ಥ
ಅರ್ಥದಿಂದಲೇ ವೇದಾಂತ
ಸಿದ್ಧಾಂತ
ಅರಿತು ನಡೆದರೆ ಸುಖಾಂತ
*****
Related Post
ಸಣ್ಣ ಕತೆ
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಅವಳೇ ಅವಳು
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…